ಮಂಜೇಶ್ವರ ಜನವರಿ, ೮: ಮುಸ್ಲಿಂ ಲೀಗ್ ಕಾರ್ಯಕರ್ತ ಕೊಯಿಪ್ಪಾಡಿಯ ಹಮೀದ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಕುಂಬಳೆ ವೃತ್ತ ನಿರೀಕ್ಷಕ ದಾಮೋದರನ್ ನೇತೃತ್ವದ ಪೋಲೀಸರ ತಂಡ ಇಂದು ಬಂಧಿಸಿದ್ದಾರೆ. ಬಂಧಿತರನ್ನು ಕುಂಬಳೆ ಪೆರ್ವಾಡ್ ಸಮುದ್ರ ತೀರದ ಕಾಲನಿಯ ನಿಯಾಸ್(೨೧) ಹಾಗೂ ಉಮ್ಮರ್ ಫಾರೂಕ್ ಎಂದು ತಿಳಿದು ಬಂದಿದೆ.
ಇವರ ಮನೆಯಿಂದ ರಕ್ತದ ಕಲೆಯಿರುವ ಕತ್ತಿಯೊಂದನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಫಾರೂಕ್ನ್ನು ಈ ಹಿಂದೆ ಎರಡು ಬಾರಿ ಹಮಿದ್ ಹಲ್ಲೆ ನಡೆಸಿದ್ದರಂತೆ ಇದಕ್ಕೆ ಪ್ರತೀಕಾರವಾಗಿ ಹಮೀದ್ ಕೊಲೆ ನಡೆದಿದೆಯೆಂದು ತನಿಖಾ ವೇಳೆ ತಿಳಿದಿರೂವುದಾಗಿ ಪೋಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಹಮೀದ್ ಸ್ನೇಹಿತರೊಂದಿಗೆ ಕುಂಬಳೆ ಪೇಟೆಯಿಂದ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ಇರಿದು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಇನ್ನೂ ಆರೋಪಿಗಳಿದ್ದಾರೆಂದು ಪೋಲೀಸರು ತಿಳಿಸಿದ್ದಾರೆ.